
Pulse of the Public
ಕಾಲ್ಪನಿಕ ಚಿತ್ರಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಮತ್ತು ಎಎಮ್ಎಮ್ ಫೌಂಡೇಶನ್ ಸೆಪ್ಟೆಂಬರ್ 18, 2026 ರಂದು ಯುವ ಆಟಗಾರರ ಪ್ರತಿಭೆ ಗುರುತಿಸಲು ಹಾಗೂ ಫುಟ್ಬಾಲ್ ಸರಣಿ ಪಂದ್ಯಾವಳಿಗಳನ್ನು ಆಯೋಜಿಸಲು ಒಪ್ಪಂದಕ್ಕೆ ಸಹಿ ಹಾಕಿವೆ.
ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 95ನೇ ವಾರ್ಷಿಕ ಮಹಾಸಭೆ ನಡೆದಿದ್ದು, 2026-27ರ ಬಜೆಟ್ ಮತ್ತು 2028ರ ಶತಮಾನೋತ್ಸವ ಆಚರಣೆಯ ಯೋಜನೆಗಳಿಗೆ ಅಂಗೀಕಾರ ನೀಡಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಕ್ರಿಕೆಟ್ ತಂಡಕ್ಕೆ ಅಧಿಕೃತ ಕಿಟ್ ಗಾತ್ರದ ವ್ಯತ್ಯಾಸ ಹಾಗೂ ನಗೋಯಾದ ವಸತಿ ಕೊಠಡಿಗಳಲ್ಲಿ ಜಾಗದ ಅಭಾವ ಎದುರಾಗಿದ್ದು, ಬಿಸಿಸಿಐ ಪ್ರತ್ಯೇಕ ಹೋಟೆಲ್ ವ್ಯವಸ್ಥೆ ಮಾಡಿದೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರಿಹ್ಯಾಬಿಲಿಟೇಶನ್ ಅವಧಿಯಲ್ಲಿ ಗಾಯಗೊಂಡ ಹರ್ಷಿತ್ ರಾಣಾ ಬದಲಿಗೆ ವಿದರ್ಭ ವೇಗಿ ಯಶ್ ಠಾಕೂರ್ ಅವರನ್ನು ಅಫ್ಘಾನಿಸ್ತಾನ ಟಿ20 ಸರಣಿ ಮತ್ತು ೨೦೨೬ರ ಏಷ್ಯನ್ ಗೇಮ್ಸ್ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.