
Pulse of the Public
ಕಾಲ್ಪನಿಕ ಚಿತ್ರಮುಂಗಾರು ಹಂಗಾಮಿನಲ್ಲಿ ಶೇ 34ರಷ್ಟು ಮಳೆ ಅಭಾವ ಉಂಟಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಾಗಡಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿದೆ.
ಮುಂಗಾರು ಋತುವಿನಲ್ಲಿ ಶೇ.64 ರಷ್ಟು ಭಾರಿ ಮಳೆ ಅಭಾವ ಎದುರಿಸುತ್ತಿರುವ ಟಿ. ನರಸೀಪುರ ತಾಲೂಕನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್ ಬೆಳೆ ಹಾನಿ ಪರಿಶೀಲಿಸಿ, ಮೇವು ಮತ್ತು ಕುಡಿಯುವ ನೀರು ಪೂರೈಸಲು ಸೂಚಿಸಿದ್ದಾರೆ.
ಆನೆ ದಾಳಿಯಿಂದ ನಾಶವಾದ ಜೋಳದ ಬೆಳೆಗೆ ಪರಿಹಾರ ಕೋರಿ ದಾಖಲೆ ಸಲ್ಲಿಸಿ ಹಿಂತಿರುಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ರೈತ ರಾಜಯ್ಯ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಸಾರ್ಥಕತೆ ಮೆರೆದಿದೆ.
ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಜಮೀನಿನ ಗಡಿ ವ್ಯಾಜ್ಯದ ಹಿನ್ನೆಲೆಯಲ್ಲಿ 27 ವರ್ಷದ ಯುವ ರೈತನನ್ನು ಹತ್ಯೆ ಮಾಡಲಾಗಿದೆ. ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.